Former chief minister of Karnataka, and BJP leader S M Krishna's sudden participation in BJP's Parivarthana rally in Mandya creates some curiosity among Kannadigas. Because he did not participated in the rally before. Is S M Krishna preparing to gain Vokkaliga votes in Mandya and Mysuru belt? <br /> <br /> <br />ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ನಡೆಸಿದ ಪರಿವರ್ತನಾ ಯಾತ್ರೆಗೆ ಹೆಚ್ಚು ಕಳೆ ಬಂದಿದ್ದು, ಮೊನ್ನೆ ಮಂಡ್ಯದಲ್ಲಿ ನಡೆದ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಭಾಗವಹಿಸಿದಾಗ. <br /> <br />ಕಾಂಗ್ರೆಸ್ ನ ಹಿರಿಯ, ಪ್ರಭಾವಿ ನಾಯಕ ಎನ್ನಿಸಿದ್ದ ಕೃಷ್ಣಾ ಅವರು ಕಳೆದ ವರ್ಷ ಬಿಜೆಪಿಗೆ ಸೇರುತ್ತಿದ್ದಂತೆಯೇ ಬಿಜೆಪಿಗೆ ಆನೆಬಲ ಸಿಕ್ಕಂತಾಯ್ತು ಎಂದುಕೊಂಡಿದ್ದವರೇ ಹಲವರು. ಆದರೆ ಪರಿವರ್ತನಾ ಯಾತ್ರೆಯಲ್ಲೆಲ್ಲೂ ಕಾಣಿಸಿಕೊಳ್ಳದೆ, ನಿರ್ಪಪ್ತರಾಗಿಯೇ ಉಳಿದ ಕೃಷ್ಣ ಅವರ ನಡೆ ಯಾರೊಬ್ಬರಿಗೂ ಅರ್ಥವಾಗಿರಲಿಲ್ಲ. <br /> <br />ಜ.20 ರಂದು ಮಂಡ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಖುದ್ದು ಹಾಜರಾಗುವ ಮೂಲಕ ತವರಿನ ಮೇಲಿನ ತಮ್ಮ ಪ್ರೀತಿಯನ್ನು ಎಸ್.ಎಂ.ಕೃಷ್ಣ ವ್ಯಕ್ತಪಡಿಸಿದ್ದಾರೆ. ಮೈಸೂರು, ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಬಿಜೆಪಿ ಪ್ರಭಾವ ಹೆಚ್ಚಿಸಲು ಎಸ್.ಎಂ.ಕೃಷ್ಟ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶ ಬಿಜೆಪಿಯದ್ದು. <br /> <br />ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಿ ಕಾಂಗ್ರೆಸ್ ನ ಭದ್ರ ಕೋಟೆ ಎನ್ನಿಸಿರುವ ಈ ಭಾಗದಲ್ಲಿ ಬಿಜೆಪಿ ತನ್ನ ಆಧಿಪತ್ಯ ಸ್ಥಾಪಿಸುವುದು ಸುಲಭವಲ್ಲ.